Wednesday, July 2, 2008

ಧರ್ಮಭಾರತೀ

‘ಧರ್ಮಭಾರತೀ’ಶಾಶ್ವತಮೌಲ್ಯಗಳನ್ನು ಸಕಾಲಿಕವಾಗಿ ಸಾರುವ ಮಾಸಿಕ. ಸನಾತನಧರ್ಮದ ಲೋಕಹಿತಕರವಾದ ಮೌಲ್ಯಗಳನ್ನು ಬಿತ್ತರಿಸುವ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಸಂಕಲ್ಪವೇ ಪತ್ರಿಕೆಯ ಹುಟ್ಟಿಗೆ ಕಾರಣ. ಏಳು ವರ್ಷಗಳ ಈ ಪಯಣದಲ್ಲಿ ಅಸಂಖ್ಯ ವಿಷಯಗಳನ್ನು ಪತ್ರಿಕೆ ಸ್ಪರ್ಶಿಸಿದೆ. ಸನಾತನಧರ್ಮ ಬಗೆದಷ್ಟೂ ಬರಿದಾಗದ ಅನರ್ಘ್ಯ ಗಣಿ. ಆದರೂ ಈ ಗಣಿಯ ಉದ್ದಗಲಗಳ ಹೊರನೋಟ ಪತ್ರಿಕೆಯಿಂದ ಸಾಧ್ಯವಾಗಿದೆ

ಸನಾತನ ಮಹರ್ಷಿಗಳು ತಮ್ಮ ತಪೋಭೂಮಿಯಲ್ಲಿ ಅರಳಿದ ದಿವ್ಯ ಮೌಲ್ಯಗಳ ಸದಾ ಬಾಡದ ಪುಷ್ಪಗಳನ್ನು ಈ ಭರತಭೂಮಿಯಲ್ಲಿ ಅರಳಿಸಿದ್ದಾರೆ. ಅದರ ದಿವ್ಯ ಗಂಧವನ್ನು, ಭಾರತೀಯತೆಯನ್ನು ಈ ಕಾಲಘಟ್ಟದಲ್ಲಿ ಉಳಿಸಿ-ಬೆಳೆಸಲು ಪತ್ರಿಕೆ ಬದ್ಧವಾಗಿದೆ. ಸದಾಚಾರಸಂಪನ್ನತೆಯನ್ನು, ಭಾರತೀಯವಾದ ವಿದ್ಯೆ-ಕಲೆಗಳ ವೈಭವವನ್ನು ಜನಮಾನಸಕ್ಕೆ ತಲುಪಿಸಿ ಅದರ ಸಂರಕ್ಷಣೆ-ಸಂವರ್ಧನೆಗೆ ಪತ್ರಿಕೆ ತನ್ನದೇ ಆದ ವಿಶಿಷ್ಟ ಸೇವೆಯೊಂದಿಗೆ ಮುಂದೆ ಸಾಗುತ್ತಿದೆ. ಆಬಾಲವೃದ್ಧರ ಮನ-ಮನೆಯೊಪ್ಪುವ ಭಾರತೀಯ ಚಿಂತನೆಗಳನ್ನು ಪ್ರಕಟಿಸಿ ಸಂಸ್ಕೃತಿಸೇವೆ ಸಲ್ಲಿಸುವುದು ಪತ್ರಿಕೆಯ ಪರಮೋದ್ದೇಶ.

ಹೆಚ್ಚಿನ ವಿವರಗಳನ್ನು ಧರ್ಮಭಾರತೀ ಅಂತರಜಾಲ ತಾಣದಲ್ಲಿ ಪಡೆಯಬಹುದು. http://www.dharmabharathi.org

No comments: