ಹರೇ ರಾಮ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರ ಸರ್ವಧಾರಿ ಚಾತುರ್ಮಾಸ್ಯ ದಿನಾಂಕ 18-07-09 ರಿಂದ 15-09-08 ರವರೆಗೆ ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯಲಿದೆ. ತಮಗೆಲ್ಲಾ ಆತ್ಮೀಯ ಸ್ವಾಗತ
Monday, July 14, 2008
Wednesday, July 2, 2008
ಶ್ರೀಭಾರತೀ ಪ್ರಕಾಶನ
ಜೀವನವನ್ನು ಉಜ್ಜೀವನಗೊಳಿಸುವ ಪುಸ್ತಕಗಳ ಪ್ರಕಾಶನಕ್ಕಾಗಿ ಸ್ಥಾಪನೆಗೊಂಡ ಸಂಸ್ಥೆ ‘ಶ್ರೀಭಾರತೀ ಪ್ರಕಾಶನ’. ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಪ್ರಕಾಶನದ ಸ್ಥಾಪಕರು. ‘ಧರ್ಮಭಾರತೀ’ ಮತ್ತು ‘ಶ್ರೀಮುಖ’ ಎನ್ನುವ ಎರಡು ಪತ್ರಿಕೆಗಳನ್ನು ಪ್ರಕಾಶನ ಹೊರತರುತ್ತಿದೆ. ಸ್ಥಾಪನೆಯಾದ ಏಳು ವರ್ಷಗಳಲ್ಲಿ ೨೨ ಗ್ರಂಥಗಳನ್ನು ಹೊರತಂದಿದೆ. ಕಡಿಮೆ ವೆಚ್ಚದಲ್ಲಿ ಶ್ರೇಷ್ಠ ವಿಚಾರಗಳನ್ನು ಓದುಗರಿಗೆ ತಲುಪಿಸುವ ಕನಸು ಪ್ರಕಾಶನದ್ದು.
ಹೆಚ್ಚಿನ ವಿವರಗಳನ್ನು ಧರ್ಮಭಾರತೀ ಅಂತರಜಾಲ ತಾಣದಲ್ಲಿ ಪಡೆಯಬಹುದು
http://www.dharmabharathi.org/shribhararthi.html
ಹೆಚ್ಚಿನ ವಿವರಗಳನ್ನು ಧರ್ಮಭಾರತೀ ಅಂತರಜಾಲ ತಾಣದಲ್ಲಿ ಪಡೆಯಬಹುದು
http://www.dharmabharathi.org/shribhararthi.html
ಧರ್ಮಭಾರತೀ
‘ಧರ್ಮಭಾರತೀ’ಶಾಶ್ವತಮೌಲ್ಯಗಳನ್ನು ಸಕಾಲಿಕವಾಗಿ ಸಾರುವ ಮಾಸಿಕ. ಸನಾತನಧರ್ಮದ ಲೋಕಹಿತಕರವಾದ ಮೌಲ್ಯಗಳನ್ನು ಬಿತ್ತರಿಸುವ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಸಂಕಲ್ಪವೇ ಪತ್ರಿಕೆಯ ಹುಟ್ಟಿಗೆ ಕಾರಣ. ಏಳು ವರ್ಷಗಳ ಈ ಪಯಣದಲ್ಲಿ ಅಸಂಖ್ಯ ವಿಷಯಗಳನ್ನು ಪತ್ರಿಕೆ ಸ್ಪರ್ಶಿಸಿದೆ. ಸನಾತನಧರ್ಮ ಬಗೆದಷ್ಟೂ ಬರಿದಾಗದ ಅನರ್ಘ್ಯ ಗಣಿ. ಆದರೂ ಈ ಗಣಿಯ ಉದ್ದಗಲಗಳ ಹೊರನೋಟ ಪತ್ರಿಕೆಯಿಂದ ಸಾಧ್ಯವಾಗಿದೆ
ಸನಾತನ ಮಹರ್ಷಿಗಳು ತಮ್ಮ ತಪೋಭೂಮಿಯಲ್ಲಿ ಅರಳಿದ ದಿವ್ಯ ಮೌಲ್ಯಗಳ ಸದಾ ಬಾಡದ ಪುಷ್ಪಗಳನ್ನು ಈ ಭರತಭೂಮಿಯಲ್ಲಿ ಅರಳಿಸಿದ್ದಾರೆ. ಅದರ ದಿವ್ಯ ಗಂಧವನ್ನು, ಭಾರತೀಯತೆಯನ್ನು ಈ ಕಾಲಘಟ್ಟದಲ್ಲಿ ಉಳಿಸಿ-ಬೆಳೆಸಲು ಪತ್ರಿಕೆ ಬದ್ಧವಾಗಿದೆ. ಸದಾಚಾರಸಂಪನ್ನತೆಯನ್ನು, ಭಾರತೀಯವಾದ ವಿದ್ಯೆ-ಕಲೆಗಳ ವೈಭವವನ್ನು ಜನಮಾನಸಕ್ಕೆ ತಲುಪಿಸಿ ಅದರ ಸಂರಕ್ಷಣೆ-ಸಂವರ್ಧನೆಗೆ ಪತ್ರಿಕೆ ತನ್ನದೇ ಆದ ವಿಶಿಷ್ಟ ಸೇವೆಯೊಂದಿಗೆ ಮುಂದೆ ಸಾಗುತ್ತಿದೆ. ಆಬಾಲವೃದ್ಧರ ಮನ-ಮನೆಯೊಪ್ಪುವ ಭಾರತೀಯ ಚಿಂತನೆಗಳನ್ನು ಪ್ರಕಟಿಸಿ ಸಂಸ್ಕೃತಿಸೇವೆ ಸಲ್ಲಿಸುವುದು ಪತ್ರಿಕೆಯ ಪರಮೋದ್ದೇಶ.
ಹೆಚ್ಚಿನ ವಿವರಗಳನ್ನು ಧರ್ಮಭಾರತೀ ಅಂತರಜಾಲ ತಾಣದಲ್ಲಿ ಪಡೆಯಬಹುದು. http://www.dharmabharathi.org
ಸನಾತನ ಮಹರ್ಷಿಗಳು ತಮ್ಮ ತಪೋಭೂಮಿಯಲ್ಲಿ ಅರಳಿದ ದಿವ್ಯ ಮೌಲ್ಯಗಳ ಸದಾ ಬಾಡದ ಪುಷ್ಪಗಳನ್ನು ಈ ಭರತಭೂಮಿಯಲ್ಲಿ ಅರಳಿಸಿದ್ದಾರೆ. ಅದರ ದಿವ್ಯ ಗಂಧವನ್ನು, ಭಾರತೀಯತೆಯನ್ನು ಈ ಕಾಲಘಟ್ಟದಲ್ಲಿ ಉಳಿಸಿ-ಬೆಳೆಸಲು ಪತ್ರಿಕೆ ಬದ್ಧವಾಗಿದೆ. ಸದಾಚಾರಸಂಪನ್ನತೆಯನ್ನು, ಭಾರತೀಯವಾದ ವಿದ್ಯೆ-ಕಲೆಗಳ ವೈಭವವನ್ನು ಜನಮಾನಸಕ್ಕೆ ತಲುಪಿಸಿ ಅದರ ಸಂರಕ್ಷಣೆ-ಸಂವರ್ಧನೆಗೆ ಪತ್ರಿಕೆ ತನ್ನದೇ ಆದ ವಿಶಿಷ್ಟ ಸೇವೆಯೊಂದಿಗೆ ಮುಂದೆ ಸಾಗುತ್ತಿದೆ. ಆಬಾಲವೃದ್ಧರ ಮನ-ಮನೆಯೊಪ್ಪುವ ಭಾರತೀಯ ಚಿಂತನೆಗಳನ್ನು ಪ್ರಕಟಿಸಿ ಸಂಸ್ಕೃತಿಸೇವೆ ಸಲ್ಲಿಸುವುದು ಪತ್ರಿಕೆಯ ಪರಮೋದ್ದೇಶ.
ಹೆಚ್ಚಿನ ವಿವರಗಳನ್ನು ಧರ್ಮಭಾರತೀ ಅಂತರಜಾಲ ತಾಣದಲ್ಲಿ ಪಡೆಯಬಹುದು. http://www.dharmabharathi.org
ಪ್ರತಿವರ್ಷ ನಡೆಯುವ ಉತ್ಸವಗಳು
ಶ್ರೀಮಠವು ಪ್ರತಿವರ್ಷವೂ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾಲಾವೈಭವಗಳನ್ನೊಳಗೊಂಡ ರಾಮೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ.
ಚಾತುರ್ಮಾಸ್ಯ ವ್ರತ: ಈ ಅವಧಿಯಲ್ಲಿ ಶಾಸ್ತ್ರ ಸಮೀಕ್ಷೆ, ವೇದ ಸಮ್ಮೇಳನ, ಕೃಷಿ, ಚಿತ್ರಕಲೆ ಇತ್ಯಾದಿ ಶೈಕ್ಷಣಿಕ ಕಾರ್ಯಕ್ರಮಗಳು ಜರುಗುವವು. ಗುರುಶಿಷ್ಯ ಸಮಾಗಮವಾಗುವ ಈ ಅವಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗುವವು.
ರಾಷ್ಟ್ರ ಹಾಗು ರಾಜ್ಯಮಟ್ಟದ ಸಾಮವೇದ, ಆಯುರ್ವೇದ, ಯಕ್ಷಗಾನ, ಕೃಷಿ ಮೊದಲಾದ ಸಮ್ಮೇಳನಗಳನ್ನು ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಗುರುತಿಸಲು ಚಿತ್ರಕಲೆ, ಸಂಗೀತ, ಭಾಷಣ, ಭಗವದ್ಗೀತೆ ಮತ್ತು ಕ್ರೀಡಾಸ್ಪರ್ಧೆಗಳನ್ನು ಸಂಘಟಿಸಿ ಪುರಸ್ಕರಿಲಾಗುತ್ತಿದೆ
ಚಾತುರ್ಮಾಸ್ಯ ವ್ರತ: ಈ ಅವಧಿಯಲ್ಲಿ ಶಾಸ್ತ್ರ ಸಮೀಕ್ಷೆ, ವೇದ ಸಮ್ಮೇಳನ, ಕೃಷಿ, ಚಿತ್ರಕಲೆ ಇತ್ಯಾದಿ ಶೈಕ್ಷಣಿಕ ಕಾರ್ಯಕ್ರಮಗಳು ಜರುಗುವವು. ಗುರುಶಿಷ್ಯ ಸಮಾಗಮವಾಗುವ ಈ ಅವಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗುವವು.
ರಾಷ್ಟ್ರ ಹಾಗು ರಾಜ್ಯಮಟ್ಟದ ಸಾಮವೇದ, ಆಯುರ್ವೇದ, ಯಕ್ಷಗಾನ, ಕೃಷಿ ಮೊದಲಾದ ಸಮ್ಮೇಳನಗಳನ್ನು ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಗುರುತಿಸಲು ಚಿತ್ರಕಲೆ, ಸಂಗೀತ, ಭಾಷಣ, ಭಗವದ್ಗೀತೆ ಮತ್ತು ಕ್ರೀಡಾಸ್ಪರ್ಧೆಗಳನ್ನು ಸಂಘಟಿಸಿ ಪುರಸ್ಕರಿಲಾಗುತ್ತಿದೆ
ಪ್ರಶಸ್ತಿಗಳು
ಶ್ರೀಮಠವು ಪ್ರತಿ ವರ್ಷವೂ ಮೂರು ಪ್ರಶಸ್ತಿಗಳನ್ನು ನೀಡಿ ಅನುಗ್ರಹಿಸುತ್ತಿದೆ.
ಶ್ರೀರಾಮಾನುಗ್ರಹ ಪ್ರಶಸ್ತಿ: ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸಿದವರಿಗೆ ಸಮ್ಮಾನ.
ಚಾತುರ್ಮಾಸ್ಯ ಪ್ರಶಸ್ತಿ: ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಪುರಸ್ಕಾರ.
ಶ್ರೀಮಾತಾ ಪ್ರಶಸ್ತಿ: ಸಮಾಜ ಸೇವೆಗಾಗಿ ಜೀವನವನ್ನು ಮುಡಿಪಾಗಿರಿಸಿದ ಮಹಿಳೆಯರನ್ನು ಗುರುತಿಸಿ ಗೌರವಿಸುವುದು.
ಶ್ರೀರಾಮಾನುಗ್ರಹ ಪ್ರಶಸ್ತಿ: ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸಿದವರಿಗೆ ಸಮ್ಮಾನ.
ಚಾತುರ್ಮಾಸ್ಯ ಪ್ರಶಸ್ತಿ: ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಪುರಸ್ಕಾರ.
ಶ್ರೀಮಾತಾ ಪ್ರಶಸ್ತಿ: ಸಮಾಜ ಸೇವೆಗಾಗಿ ಜೀವನವನ್ನು ಮುಡಿಪಾಗಿರಿಸಿದ ಮಹಿಳೆಯರನ್ನು ಗುರುತಿಸಿ ಗೌರವಿಸುವುದು.
ದೇವಸ್ಥಾನಗಳು
- ಶ್ರೀ ಬಟ್ಟೆ ವಿನಾಯಕ ದೇವಾಲಯ, ಕೆಕ್ಕಾರು, ಹೊನ್ನಾವರ ತಾಲ್ಲೂಕು
- ಶ್ರೀ ಸ್ವಯಂಭು ದೇವಾಲಯ, ಕಡತೋಕ, ಹೊನ್ನಾವರ ತಾಲ್ಲೂಕು
- ಶ್ರೀರಾಮ ದೇವಾಲಯ, ಚೊಕ್ಕಾಡಿ, ಸುಳ್ಯ ತಾಲ್ಲೂಕು
- ಶ್ರೀಉಮಾಮಹೇಶ್ವರಿ ದೇವಸ್ಥಾನ, ಹೊಸಗುಂದ, ಸಾಗರ ತಾಲ್ಲೂಕು
ಆಸ್ಪತ್ರೆಗಳು ಮತ್ತು ವೈದ್ಯಕೀಯ ಕೇಂದ್ರಗಳು
- ಶ್ರೀಭಾರತೀ ನೇತ್ರ ಚಿಕಿತ್ಸಾಲಯ, ಮುಜಂಗಾವು, ಕಾಸರಗೋಡು ಜಿಲ್ಲೆ,
- ಶ್ರೀಭಾರತೀ ಸ್ವಾಸ್ಥ್ಯ ಮಂದಿರ, ಮುಜಂಗಾವು, ಕಾಸರಗೋಡು ಜಿಲ್ಲೆ.
- ಪುಣ್ಯಕೋಟಿ ಕ್ಯಾನ್ಸರ್ ಅವೇರ್ನೆಸ್, ಕೇರ್ ಮತ್ತು ರಿಸೆರ್ಚ್ ಸೆಂಟರ್, ಮುಳ್ಳೇರಿಯ, ಕಾಸರಗೋಡು
- ಶ್ರೀಭಾರತೀ ಆರೋಗ್ಯಧಾಮ, ಆರ್.ಪಿ.ಸಿ. ಲೇಔಟ್, ವಿಜಯನಗರ, ಬೆಂಗಳೂರು
- ಶ್ರೀಭಾರತೀ ಗವ್ಯ ಚಿಕಿತ್ಸಾಲಯ, ಹೊಸನಗರ
- ಅಮೃತಭಾರತೀ ಗವ್ಯ ಚಿಕಿತ್ಸಾಲಯ, ಮುಳಿಯ
- ಅಮೃತಭಾರತೀ ಮೆಡಿಕಲ್ ಸೆಂಟರ್, ಮಂಚಿ, ಬಂಟ್ವಾಳ ತಾಲ್ಲೂಕು
- ಶ್ರೀಭಾರತೀ ಮೊಬೈಲ್ ಹಾಸ್ಪಿಟಲ್, ಸಾಗರ, ಶಿವಮೊಗ್ಗ ಜಿಲ್ಲೆ
- ಅಮೃತಭಾರತೀ ಚಿಕಿತ್ಸಾಲಯ (ಗವ್ಯ ಚಿಕಿತ್ಸಾ ಕೇಂದ್ರ), ಶ್ರೀರಾಮಾಶ್ರಮ, ಗಿರಿನಗರ, ಬೆಂಗಳೂರು
Subscribe to:
Posts (Atom)