Wednesday, June 25, 2008

ಶ್ರೀರಾಮಚಂದ್ರಾಪುರಮಠ

ಶ್ರೀರಾಮಚಂದ್ರಾಪುರಮಠ - ಶ್ರೇಷ್ಟ ಪರಂಪರೆಯ ಸುಧೀರ್ಘ ಪಥದಲ್ಲಿ
ಸನಾತನ ಧರ್ಮ ಪ್ರಸಾರಕ್ಕಾಗಿ ಶ್ರೀ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮಠಗಳಲ್ಲಿ ಅವಿಚ್ಛಿನ್ನ ಪರಂಪರೆಯ ಶ್ರೀರಾಮಚಂದ್ರಾಪುರ ಮಠವು ವಿಶಿಷ್ಟ ಸ್ಥಾನವನ್ನು ಹೊಂದಿದೆ.

ಶ್ರೀ ರಾಮಚಂದ್ರಾಪುರಮಠವು ೧೨೦೦ ವರ್ಷಗಳ ಹಿಂದೆ ಶ್ರೀ ಕ್ಷೇತ್ರ ಗೋಕರ್ಣದ ಅಶೋಕದಲ್ಲಿ ಶ್ರೀ ಶಂಕರಭಗವತ್ಪಾದರಿಂದ ಸ್ಥಾಪಿತಗೊಂಡಿತು. ಭಗವತ್ಪಾದರಿಂದ ಶ್ರೀ ಪೀಠದ ಪ್ರಥಮ ಪೀಠಾಧಿಪತಿಗಳಾಗಿ ನಿಯುಕ್ತಿಗೊಂಡವರು ಶ್ರೀ ವಿದ್ಯಾನಂದಾಚಾರ್ಯರು.

ಶ್ರೀ ಶಂಕರಭಗವತ್ಪಾದರಿಗೆ ಅಗಸ್ತ್ಯ ಶಿಷ್ಯರಾದ ವರದ ಮುನಿಗಳು ತಾವು ಪೂಜಿಸುತ್ತಿದ್ದ ಶ್ರೀರಾಮ –ಸೀತಾ ಲಕ್ಷ್ಮಣ ಮೂರ್ತಿಗಳನ್ನು ನೀಡಿದರು. ಭಗವತ್ಪಾದರು ಅವುಗಳೊಂದಿಗೆ ಶ್ರೀ ರಾಜರಾಜೇಶ್ವರೀ ಮತ್ತು ಶ್ರೀ ಚಂದ್ರಮೌಳೀಶ್ವರ ಲಿಂಗಗಳನ್ನು ಸೇರಿಸಿ ವಿದ್ಯಾನಂದಾಚಾರ್ಯರಿಗೆ ಅನುಗ್ರಹಿಸಿದರು. ಆ ದೇವತಾ ಮೂರ್ತಿಗಳು ಅಂದಿನಿಂದ ಇಂದಿನವರೆಗೂ ಅನುದಿನವೂ ಶ್ರೀ ಮಠದಲ್ಲಿ ಶ್ರೀಗಳವರಿಂದ ಪೂಜೆಗೊಳ್ಳುತ್ತಿವೆ.

ಶ್ರೀ ಮಠಕ್ಕೆ ಪರಂಪರಾಗತವಾದ ವಿಶಾಲವ್ಯಾಪ್ತಿಯ ಶಿಷ್ಯ ಸಮೂಹವಿದೆ. ಜಾತಿ- ವರ್ಗಭೇದವಿಲ್ಲದೆ ದೇಶ-ವಿದೇಶಗಳ ಭಕ್ತಾಭಿಮಾನಿಗಳು ಶ್ರೀಗಳವರ ಮಾರ್ಗದರ್ಶನ ಪಡೆಯುತ್ತಿದ್ದಾರೆ.

ಪ್ರಕೃತ ಶ್ರೀ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮಿಗಳವರು ಸನಾತನಧರ್ಮದ ಪುನರುಜ್ಜೀವನಕ್ಕಾಗಿ ಹಾಗೂ ಜನ ಸಮೂಹದ ಜೀವನೋತ್ಕರ್ಷಕ್ಕಾಗಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕ್ರ್ರತಿಕ ಯೋಜನೆಗಳನ್ನು ರೂಪಿಸಿದ್ದಾರೆ.

No comments: